ರಾಜ್ಯದಲ್ಲಿ ಇಂದು 20,246 ಜನ ಗುಣಮುಖರಾಗಿ ಬಿಡುಗಡೆ, 10,959 ಜನರಿಗೆ ಸೋಂಕು ದೃಢ, ಪಾಸಿಟಿವಿಟಿ ದರ ಶೇಕಡ 6.68 ಕ್ಕೆ ಇಳಿಕೆ

ರಾಜ್ಯದಲ್ಲಿ ಇಂದು 20,246 ಜನ ಗುಣಮುಖರಾಗಿ ಬಿಡುಗಡೆ, 10,959 ಜನರಿಗೆ ಸೋಂಕು ದೃಢ, ಪಾಸಿಟಿವಿಟಿ ದರ ಶೇಕಡ 6.68 ಕ್ಕೆ ಇಳಿಕೆ



ರಾಜ್ಯದಲ್ಲಿ ಇಂದು ದೃಢಪಟ್ಟ  ಕೊರೋನ ಸೋಂಕಿತರ ಸಂಖ್ಯೆ 10,959. ಪಾಸಿಟಿವಿಟಿ ದರ ಶೇಕಡ 6.68 ರಷ್ಟು ಇಳಿಕೆಯಾಗಿದೆ. ಇಂದು 192 ಸೋಂಕಿತರು ಸಾವನ್ನಪ್ಪಿದ್ದಾರೆ. ಮತ್ತು ಇವತ್ತು 20,246 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ 2,15,525 ಸಕ್ರಿಯ ಪ್ರಕರಣಗಳು ಇವೆ.

ಹೆಚ್ಚಿನ ಸುದ್ದಿಗಾಗಿ ಇಲ್ಲಿ ಒತ್ತಿರಿ

ರಾಜ್ಯದಲ್ಲಿ ಜೂನ್ ಹದಿನಾಲ್ಕರ ನಂತರ ಅನ್ ಲಾಕ್?? ಆರೋಗ್ಯ ಸಚಿವರು ಹೇಳಿದ್ದೇನು ??
ಬೆಂಗಳೂರು : ಒಂದೇ ಬಾರಿಗೆ ಎಲ್ಲ ಚಟುವಟಿಕೆಗಳಿಗೆ ಅವಕಾಶ ನೀಡಿದರೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಬಹುದು. ರಾಜ್ಯದಲ್ಲಿ ಹಂತ ಹಂತವಾಗಿ ಅನ್ಲಾಕ್ ಪ್ರಕ್ರಿಯೆ ನಡೆಯಲಿದೆ. ಅನ್ಲಾಕ್ ಸ್ವರೂಪದ ಬಗ್ಗೆ ಮುಖ್ಯಮಂತ್ರಿಗಳು ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.


ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೆಲ ಚಟುವಟಿಕೆಗೆ ನಿರ್ಬಂಧ ಹೇರಿ, ಇನ್ನೂ ಕೆಲ ಚಟುವಟಿಕೆಗಳಿಗೆ ಅವಕಾಶ ನೀಡಬಹುದು. ಈ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ನೀಡುವ ಸಲಹೆಯನ್ನು ಮುಖ್ಯಮಂತ್ರಿಗಳಿಗೆ ತಿಳಿಸಲಾಗುವುದು. ಮುಖ್ಯಮಂತ್ರಿಗಳು ಎಲ್ಲರೊಂದಿಗೆ ಚರ್ಚಿಸಿ ಅನ್ ಲಾಕ್ ಯಾವ ರೀತಿ ಇರಬೇಕೆಂದು ತೀರ್ಮಾನ ಮಾಡುತ್ತಾರೆ. ಪಾಸಿಟಿವಿಟಿ ದರ ಶೇ.5 ಕ್ಕಿಂತ ಕಡಿಮೆ, 5 ಸಾವಿರಕ್ಕಿಂತ ಕಡಿಮೆ ಪ್ರಕರಣ ಇದ್ದರೆ ಅನ್ ಲಾಕ್ ಮಾಡಬಹುದೆಂಬ ಅಭಿಪ್ರಾಯ ಇದೆ ಎಂದರು.
أحدث أقدم