Expendition 2021- ಲಕ್ಷ್ಮೇಶ್ವರ ದೂದ್ ನಾನಾ ದರ್ಗಾದಲ್ಲಿ ಇಂದು ಅಧಿಕೃತ ಚಾಲನೆ

Expendition 2021- ಲಕ್ಷ್ಮೇಶ್ವರ ದೂದ್ ನಾನಾ ದರ್ಗಾದಲ್ಲಿ ಇಂದು ಅಧಿಕೃತ ಚಾಲನೆ 


ಎಸ್ಸೆಸ್ಸೆಫ್ ರಾಷ್ಟ್ರೀಯ ನಾಯಕರ EXPEDITION -2021 ನಿನ್ನೆ ಮಂಗಳೂರಿನಿಂದ ಆರಂಭಗೊಂಡಿದೆ.  ರಾಷ್ಟ್ರಾದ್ಯಂತ ಸಂಘಟನೆಯನ್ನು ಬಲಿಷ್ಠವಾಗಿ ಕಟ್ಟುವ ಉದ್ದೇಶದಿಂದ 24ರಾಜ್ಯಗಳಿಗೆ ರಾಷ್ಟ್ರೀಯ ನಾಯಕರು ಭೇಟಿ ಕೊಟ್ಟು ರಾಜ್ಯದ ಮೂಲೆ ಮೂಲೆಗೂ ಸಂಘಟನೆ ತಲುಪಿಸಲು ಬೇಕಾದ ಕಾರ್ಯತಂತ್ರಗಳನ್ನು ರೂಪಿಸಲು ಹಾಗೂ ರಾಜ್ಯ ನಾಯಕರಿಗೆ ವಿಶೇಷ ತರಬೇತಿಯನ್ನು ನೀಡುವ ಮೂಲಕ ಸಕ್ರೀಯಗೊಳಿಸಲು ರಾಷ್ಟ್ರೀಯ ಅಧ್ಯಕ್ಷ ಡಾ. ಫಾರೂಖ್ ನಈಮಿ ಕೊಲ್ಲಂ ಹಾಗೂ ಪ್ರಧಾನ ಕಾರ್ಯದರ್ಶಿ ನೌಶಾದ್ ಆಲಂ ಮಿಸ್ಬಾಹಿ ಒಡಿಸ್ಸಾ ರವರ ನೇತೃತ್ವದಲ್ಲಿ ನಡೆಯುತ್ತಿರುವ ಯಾತ್ರೆಯಿದು. 


ವಿಶಾಲವಾದ ಭಾರತದ 24 ರಾಜ್ಯಗಳನ್ನು ಗುರಿಯಿಟ್ಟು ಈ ಕಾರ್ಯಕ್ರಮ ನಡೆಯಲಿದ್ದು ಇಂದು (05/08) ಗದಗ ಜಿಲ್ಲೆಯ ಲಕ್ಷ್ಮೇಶ್ವರ ದೂದನಾನಾ ದರ್ಗಾ ದರ್ಬಾರಿನಲ್ಲಿ  ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ದೊರೆಯಲಿದೆ.
أحدث أقدم