ಇಂದಿನಿಂದ ಹತ್ತು ದಿನ 'ವಿಧಾನಮಂಡಲ ಕಲಾಪ' ಆರಂಭ: ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ

ಇಂದಿನಿಂದ ಹತ್ತು ದಿನ 'ವಿಧಾನಮಂಡಲ ಕಲಾಪ' ಆರಂಭ: ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ 


ಬೆಂಗಳೂರು: ಸೋಮವಾರದ ಇಂದಿನಿಂದ 10 ದಿನಗಳ ಕಾಲ ವಿಧಾನ ಮಂಡಲದ ( Karnataka Assembly ) ಅಧಿವೇಶ ಬಜೆಟ್ ನಡೆಯಲಿದೆ. ಮೊದಲ ದಿನದ ಇಂದು ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಈ ಬಾರಿ 2026 ಪ್ರಶ್ನೆಗಳು, ಸರ್ಕಾರದಿಂದ ಎರಡು ವಿಧೇಯಕಗಳು ಮಂಡನೆಯಾಗಲಿವೆ.


ಈ ಕುರಿತು ಮಾಹಿತಿ ನೀಡಿದಂತ ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು, ಸಂಪ್ರದಾಯದಂತೆ ವರ್ಷದ ಮೊದಲ ಅಧಿವೇಶನದ ವೇಳೆ ವಿಧಾನ ಮಂಡಲದ ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲರು ಇಂದು ಭಾಷಣ ಮಾಡಲಿದ್ದಾರೆ. ಫೆಬ್ರವರಿ 14ರ ಇಂದಿನಿಂದ ಸದನ ಅರಂಭಗೊಂಡು, ಫೆ.25ರವರೆಗೆ ಅಧಿವೇಶನ ನಡೆಯಲಿದೆ. ಈವರೆಗೆ 2062 ಪ್ರಶ್ನೆಗಳು 81 ಗಮನ ಸೆಳೆಯುವ ಸೂಚನೆಗಳು ಸ್ವೀಕಾರಗೊಂಡಿವೆ ಎಂದು ತಿಳಿಸಿದರು.


ಇನ್ನೂ ಈ ಬಾರಿಯ ಸದನದಲ್ಲಿ ಕರ್ನಾಟಕ ಮುದ್ರಾಂಕ (2ನೇ ತಿದ್ದುಪಡಿ ) ವಿಧೇಯಕ ಮತ್ತು ದಂಡ ಪ್ರಕ್ರಿಯಾ ಕಾನೂನು ತಿದ್ದುಪಡಿ ಆಧ್ಯಾದೇಶ ವಿಧೇಯಕ ಮಂಡನೆಯಾಗಲಿದೆ. ರಾಜ್ಯಪಾಲರ ಭಾಷಣದ ನಂತ್ರ, ಮೃತರಾದ ಸದನದ ಸದಸ್ಯರು, ಸಮಾಜದ ವಿವಿಧ ಕ್ಷೇತ್ರದ ಗಣ್ಯರಿಗೆ ಸಂತಾಪ ಸೂಚಿಸಲಾಗುತ್ತದೆ ಎಂದು ತಿಳಿಸಿದರು
أحدث أقدم