ಹಿಜಾಬ್ ಗೆ ಅವಕಾಶ ನೀಡುವುದೊಂದೇ ಸಮಸ್ಯೆಗೆ ಪರಿಹಾರ: SSF

ಹಿಜಾಬ್ ಗೆ ಅವಕಾಶ ನೀಡುವುದೊಂದೇ ಸಮಸ್ಯೆಗೆ ಪರಿಹಾರ: SSF 

ಶಿವಮೊಗ್ಗ: ಹಿಜಾಬ್ ವಿವಾದವಾಗುವ ವಿಷಯವೇ ಅಲ್ಲ. ಮುಸ್ಲಿಂ ಹೆಣ್ಣುಮಕ್ಕಳು ಕಾಲೇಜಿನಲ್ಲಿ ಹಿಜಾಬ್ ಧರಿಸುತ್ತಿರುವುದು ಕೂಡ ಹೊಸದೇನಲ್ಲ. ಸಮವಸ್ತ್ರದ ದುಪ್ಪಟ್ಟಾದಲ್ಲಿ ತಲೆ ಮುಚ್ಚಿಕೊಂಡರೆ ಸಮಸ್ಯೆಯೇನು? ಇಲ್ಲಿ ಸಮಸ್ಯೆ ಹಿಜಾಬ್ ನದ್ದಲ್ಲ, ಮನಸ್ಥಿತಿಯದ್ದು. ಏಕಾಏಕಿ ಹಿಜಾಬ್ ಸಮಸ್ಯೆಯಾಗಿ ಉಲ್ಬಣಗೊಂಡಿದ್ದು ಯಾಕೆ? 


ಈ ಹಿಂದೆ ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಹಿಜಾಬ್ ವಿವಾದ ಉಂಟಾದಾಗ ಶೀಘ್ರವೇ ಬಗೆಹರಿದಿದೆ. ಆದರೆ ಕರಾವಳಿಯಲ್ಲಿ ಮಾತ್ರ ಇದು ಉಲ್ಬಣವಾಗುತ್ತಿರುವುದು ಏಕೆನ್ನುವುದು ಬಿಡಿಸಿ ಹೇಳಬೇಕಿಲ್ಲ. ವಿದ್ಯಾರ್ಥಿಗಳ ಹೆಗಲ ಮೇಲೆ ಬಂದೂಕು ಇಟ್ಟು ತಮ್ಮ ಕಾರ್ಯ ಸಾಧಿಸುವವರ ಬಗ್ಗೆ ಪ್ರಜ್ಞಾವಂತರ ಎಚ್ಚೆತ್ತುಕೊಳ್ಳಬೇಕು. ಕ್ಯಾಂಪಸ್ ಗಳನ್ನು ಪ್ರಯೋಗಶಾಲೆಯನ್ನಾಗಿ ಮಾಡುವ ಕುತ್ಸಿತ ಮನಸ್ಸುಗಳ ಷಡ್ಯಂತ್ರವನ್ನು ಅರಿತುಕೊಳ್ಳಬೇಕು. ಸಂವಿಧಾನಬದ್ಧ ಹಕ್ಕುಗಳು ಇರುವಾಗ ಇಲ್ಲಿ ಆಯ್ಕೆಯ ಪ್ರಶ್ನೆ ಉದ್ಭವಿಸುವುದಿಲ್ಲ. ಹಿಜಾಬ್ ಮುಖ್ಯವೊ? ಶಿಕ್ಷಣ ಮುಖ್ಯವೊ? ಎನ್ನುವ ಪ್ರಶ್ನೆಗಳು ಅಲ್ಪಸಂಖ್ಯಾತ ಸಮುದಾಯವನ್ನು ಇನ್ನಷ್ಟು ದುರ್ಬಲ ಗೊಳಿಸುವ ತಂತ್ರ ಮಾತ್ರವಲ್ಲದೆ, ಸಮುದಾಯವನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ಕುತಂತ್ರವೂ ಹೌದು.


ಹಿಜಾಬ್ ಧರಿಸದ ವಿದ್ಯಾರ್ಥಿನಿಗಳನ್ನು ಶಾಲೆಯ ಕ್ಯಾಂಪಸ್ ನೊಳಗೆ ಪ್ರವೇಶ ನಿರಾಕರಿಸಿದ ಪ್ರಾಂಶುಪಾಲರ ಮನಸ್ಥಿತಿ ನಿಜಕ್ಕೂ ಗಾಬರಿ ಹುಟ್ಟಿಸುವಂತದ್ದು. ಭಾರತದಂತ ಪ್ರಜಾಸತಾತ್ಮಕ ರಾಷ್ಟ್ರದಲ್ಲಿ ಇಂತಹ ಸರ್ವಾಧಿಕಾರಿ ಧೋರಣೆ ಒಪ್ಪಿಕೊಳ್ಳುವಂತದ್ದಲ್ಲ. ಬಟ್ಟೆ ಕಾರಣಕ್ಕೆ ಶಿಕ್ಷಣದ ಮೂಲಭೂತ ಹಕ್ಕನ್ನು ಕಿತ್ತುಕೊಂಡಿರುವುದು ಐತಿಹಾಸಿಕ ದುರಂತ. ಆಸಕ್ತರು ಹಿಜಾಬ್ ಧರಿಸುವುದರಿಂದ ಇತರ ಯಾರಿಗೂ ತೊಂದರೆ ಉಂಟು ಮಾಡುವುದಿಲ್ಲ. ಆದುದರಿಂದ ಸಮವಸ್ತ್ರ ಬಣ್ಣದ ಹಿಜಾಬ್ ಧರಿಸಲು ವಿದ್ಯಾರ್ಥಿನಿಯರಿಗೆ ಅವಕಾಶ ಕೊಡುವುದೊಂದೇ ವಿವಾದಕ್ಕೆ ಪರಿಹಾರ 


ಅಬ್ದುಲ್ ಲತೀಫ್ ಸಅದಿ 
ಅಧ್ಯಕ್ಷರು SSF ಕರ್ನಾಟಕ ರಾಜ್ಯ
أحدث أقدم