ಉಳ್ಳಾಲ ದರ್ಗಾ ಚುನಾವಣೆ: ಆಡಳಿತ ಸಮಿತಿಗೆ 55 ಮಂದಿ ಸದಸ್ಯರ ಆಯ್ಕೆ

ಉಳ್ಳಾಲ ದರ್ಗಾ ಚುನಾವಣೆ: ಆಡಳಿತ ಸಮಿತಿಗೆ 55 ಮಂದಿ ಸದಸ್ಯರ ಆಯ್ಕೆ 


ಮಂಗಳೂರು, ಫೆ.25: ಉಳ್ಳಾಲ ಜುಮಾ ಮಸ್ಜಿದ್ ಮತ್ತು ಸೈಯದ್ ಮುಹಮ್ಮದ್ ಶರೀಫುಲ್ ಮದನಿ ದರ್ಗಾ ಆಡಳಿತ ಸಮಿತಿಗೆ ಶನಿವಾರ ಶಾಂತಿಯುತ ಚುನಾವಣೆ ನಡೆಯಿತು.

ನೋಂದಾಯಿತ 3,512 ಮತದಾರರ ಪೈಕಿ 2,935 ಮಂದಿ ಮತ ಚಲಾಯಿಸಿದರು. ಒಟ್ಟು ಶೇ.86.6 ಮತದಾನವಾಗಿದೆ ಎಂದು ದ.ಕ.ಜಿಲ್ಲಾ ವಕ್ಫ್ ಅಧಿಕಾರಿ ಹಾಗೂ ಚುನಾವಣಾಧಿಕಾರಿ ಸೈಯದ್ ಮೊಹಝಂ ಪಾಶಾ ತಿಳಿಸಿದ್ದಾರೆ.

ಕೋಟೆಪುರ, ಮೇಲಂಗಡಿ, ಮುಕ್ಕಚೇರಿ, ಅಳೇಕಲ, ಕಲ್ಲಾಪು ಹೀಗೆ 5 ಕರಿಯ (ವಲಯ)ಗಳಿಂದ ತಲಾ 11 ಮಂದಿಯಂತೆ 55 ಮಂದಿ ಸದಸ್ಯರ ಆಯ್ಕೆಗೆ 80 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಮತದಾನವು ಮುಕ್ಕಚೇರಿ-ಒಂಭತ್ತುಕೆರೆಯ ದ.ಕ.ಜಿ.ಪಂ. ಹಿ.ಪ್ರಾ. ಶಾಲೆಯಲ್ಲಿ ಬೆಳಗ್ಗೆ 8ರಿಂದ ಅಪರಾಹ್ನ 3ರವರೆಗೆ ನಡೆಯಿತು. ಸಂಜೆ 4ಕ್ಕೆ ಮತ ಎಣಿಕೆ ಆರಂಭಿಸಲಾಗಿದ್ದು, ರಾತ್ರಿ ಫಲಿತಾಂಶ ಪ್ರಕಟಿಸಲಾಯಿತು. ಮತದಾನ ಕೇಂದ್ರದ ವ್ಯಾಪ್ತಿಯಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಚುನಾಯಿತರಾದ ನೂತನ ಸದಸ್ಯರ ವಿವರ:-

ಮೇಲಂಗಡಿ ಕರಿಯ: ಜಬ್ಬಾರ್ ಯು.ಎಂ., ನಝೀರ್ ಉಳ್ಳಾಲ ಬಾವಾ, ಮುಹಮ್ಮದ್ ಇಸಾಕ್, ಮೊಹಿದಿನಬ್ಬ, ಅಶ್ರಫ್, ಅಬ್ದುಲ್ ಸಮದ್, ಇಬ್ರಾಹಿಂ ಶೌಕತ್, ಝೈನುದ್ದೀನ್, ಮುಹಮ್ಮದ್ ಬಾವಾ ಉಳ್ಳಾಲ, ಮುಹಮ್ಮದ್ ರಫೀಕ್, ಬಾವಾ ಗುಲಾಂ ಹನೀಫ್.

ಅಲೇಕಳ ಕರಿಯ: ಮುಹಮ್ಮದ್ ಹನೀಫಾ, ಮುಹಮ್ಮದ್ ಫಾರೂಕ್ ಯು, ಅಶ್ರಫ್ ಅಹ್ಮದ್ ಯು.ಎಂ, ಅಬ್ದುಲ್ ಖಾದರ್ ಯು.ಎಂ, ಅಬ್ದುಲ್ ಹಮೀದ್ ಯು.ಡಿ., ಇಬ್ರಾಹಿಂ ಸಯ್ಯದ್, ಇರ್ಫಾನ್, ಮುಹಮ್ಮದ್ ಶಿಹಾಬುದ್ದೀನ್ ಪಿ., ಮುಹಮ್ಮದ್ ರಿಯಾಝ್, ಮುಸ್ತಫಾ, ಸಯ್ಯದ್ ಅಬ್ದುಲ್ ಝಿಯಾದ್.

ಮುಕ್ಕಚ್ಚೇರಿ ಕರಿಯ: ಅಬೂಬಕ್ಕರ್, ಅಯ್ಯೂಬ್ ಯು.ಕೆ., ಖಲೀಲ್, ಅಹ್ಮದ್ ತಂಝೀಲ್ ಎಸ್, ಇಸ್ಮಾಯಿಲ್, ಖಲೀಲ್, ಫಾರೂಕ್ ಅಬೂಬಕ್ಕರ್ ಉಳ್ಳಾಲ, ಆಝಾದ್ ಇಸ್ಮಾಯಿಲ್, ನಾಝಿಂ ರಹ್ಮಾನ್ ಉಳ್ಳಾಲ, ಮಯ್ಯದ್ದಿ ಉಳ್ಳಾಲ ಬಸ್ತಿಪಡ್ಪು, ಉಳ್ಳಾಲ ನಾಸೀರ್.

ಕಲ್ಲಾಪು ಕರಿಯ: ಮುಹಮ್ಮದ್ ಕೆ., ಫಾರೂಕ್ ಯು.ಎಚ್., ಮುಹಮ್ಮದ್ ಅರೀಫ್ ಯು., ಅಮೀರ್ ಅಹ್ಮದ್, ಮುಹಮ್ಮದ್ ಇಮ್ತಿಯಾಝ್ ಹುಸೇನ್, ಮುಹಮ್ಮದ್ ಇಜಾಝ್, ಮುಹಮ್ಮದ್ ಮುಸ್ತಫ, ಮುಹಮ್ಮದ್ ಪಿ.ಎಚ್., ಮುಹಮ್ಮದ್ ಮುಸ್ತಫ, ಮೊಯ್ದಿನ್, ಪೊಸಹಿತ್ಲು ಹಮೀದ್.

ಕೋಟೆಪುರ ಕರಿಯ: ಅಬ್ದುಲ್ ಅಝೀಝ್, ಅಬ್ದುಲ್ ಖಾದರ್, ಬಶೀರ್ ಯುಬಿಎಂ, ಮುಹಮ್ಮದ್ ರಫೀಕ್, ಹಸೈನಾರ್ ಯುಕೆ, ಹಸೈನಾರ್ ಯು, ಅಬೂಬಕ್ಕರ್, ಅಶ್ರಫ್ ಮುಹಮ್ಮದ್, ಮುಹಮ್ಮದ್ ಅಬ್ದುಲ್ ಖಾದರ್, ರಫೀಕ್ ಯುಎಂ, ತಹಸೀನ್ ಯುಟಿ.

أحدث أقدم