ನಿನ್ನೆಯೇ ಬರಬೇಕಿದ್ದ 'ಮುಂಗಾರು ಮಳೆ' ಇನ್ನೂ ನಾಲ್ಕು ದಿನ ವಿಳಂಬ: ಹವಾಮಾನ ಇಲಾಖೆ ಮಾಹಿತಿ

ನಿನ್ನೆಯೇ ಬರಬೇಕಿದ್ದ 'ಮುಂಗಾರು ಮಳೆ' ಇನ್ನೂ ನಾಲ್ಕು ದಿನ ವಿಳಂಬ: ಹವಾಮಾನ ಇಲಾಖೆ ಮಾಹಿತಿ


ನವದೆಹಲಿ : ಮುಂಗಾರು ಮಾರುತಗಳು ಜೂನ್ 4 ರ ನಿನ್ನೆ ಕೇರಳ ಪ್ರವೇಶಿಸಲು ವೀಪಲವಾಗಿದ್ದು, ಇನ್ನೂ 3-4 ದಿನ ತಡವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂಗಾರು ಮಾರುತಗಳು ಜೂನ್ 4 ರಂದು ಕೇರಳ ರಾಜ್ಯವನ್ನು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.


ಆದರೆ ಮುಂಗಾರು ಮಾರುತಗಳ ಕುರಿತಾಗಿ ಉತ್ತಮ ಪರಿಸ್ಥಿತಿಗಳು ನಿರ್ಮಾಣವಾಗುತ್ತಿದ್ದು, ದಕ್ಷಿಣ ಅರಬ್ಬಿ ಸಮುದ್ರದಲ್ಲಿ ಮಾರುತ ಚಲನೆ ವೇಗ ಪಡೆದುಕೊಂಡಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಸದ್ಯ ಸಮುದ್ರಮಟ್ಟಕ್ಕಿಂತ 2 ಕಿ. ಮೀ ಎತ್ತರದವರೆಗೆ ಮಾರುತಗಳು ಪೂರ್ವಾಭಿಮುಖವಾಗಿ ಬೀಸುತ್ತಿದೆ. ಹಾಗಾಗಿ ಮುಂದಿನ 3-4 ದಿನಗಳಲ್ಲಿ ಮುಂಗಾರು ಕೇರಳ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.



أحدث أقدم