ಆಪರೇಷನ್ ಸಿಂಧೂರ್: ಭಾರತದ ಹಲವು ವಿಮಾನಗಳ ಸಂಚಾರ ರದ್ದು

ಆಪರೇಷನ್ ಸಿಂಧೂರ್: ಭಾರತದ ಹಲವು ವಿಮಾನಗಳ ಸಂಚಾರ ರದ್ದು 


ಪೆಹಲ್ಗಾಂ ಉಗ್ರರ ದಾಳಿಗೆ ಭಾರತ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಆರಂಭಿಸಿದ್ದು ಬುಧವಾರ ಇಂದು ಹಲವು ವಿಮಾನಗಳ ಸೇವೆ ರದ್ದು ಮಾಡಲಾಗಿದ್ದು ಹಲವು ಬದಲಾವಣೆಗಳನ್ನು ಮಾಡಲಾಗಿದೆ. 


ಗಡಿಯಲ್ಲಿ ಭಾರತ ಪಾಕಿಸ್ಥಾನ ನಡುವಿನ ಉದ್ವಿಘ್ನತೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ದೇಶದ ವಾಯುಪ್ರದೇಶದಲ್ಲಿ ನಾಗರಿಕ ವಿಮಾನಗಳ ಹಾರಾಟದಲ್ಲಿ ವ್ಯತ್ಯಾಸ ಆಗಲಿದೆ ಎಂದು ಇಂಡಿಗೋ ಏರ್‌ಲೈನ್ಸ್ ಮೇ 7ರ ಬುಧವಾರ ತಿಳಿಸಿದೆ.

ಕೇಂದ್ರದ ಸೂಚನೆ ಬರುವವರೆಗೆ ವಿಮಾನಯಾನ ಸೇವೆಗಳನ್ನು ರದ್ದು ಪಡಿಸಿದೆ. ಅದರಂತೆ ಶ್ರೀನಗರ, ಜಮ್ಮು, ಅಮೃತಸರ, ಲೇಹ್, ಚಂಡೀಗಢ, ಧರ್ಮಶಾಲಾ ಮತ್ತು ಬಿಕಾನೇರ್‌ಗೆ ಹೋಗುವ, ಬರುವ ವಿಮಾನಗಳು ತಡವಾಗಬಹುದು ಅಥವಾ ರದ್ದಾಗಬಹುದು ಎಂದು ಇಂಡಿಗೋ ಏರ್‌ಲೈನ್ಸ್ ಖಚಿತಪಡಿಸಿದೆ. ಉತ್ತರ ಭಾರತದ ಕೆಲ ವಿಮಾನ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ ಎಂದು ಸ್ಪೈಸ್‌ಜೆಟ್ ತಿಳಿಸಿದೆ ಎಂದು ವರದಿಯಾಗಿದೆ.

أحدث أقدم