ನೂತನ ಸಚಿವರಿಗೆ ಜಿಲ್ಲಾ ಉಸ್ತುವಾರಿಯನ್ನು ನೀಡಿದ ಸಿಎಂ ಬಸವರಾಜ್ ಬೊಮ್ಮಾಯಿ

ನೂತನ ಸಚಿವರಿಗೆ ಜಿಲ್ಲಾ ಉಸ್ತುವಾರಿಯನ್ನು ನೀಡಿದ ಸಿಎಂ ಬಸವರಾಜ್ ಬೊಮ್ಮಾಯಿ


ಬೆಂಗಳೂರು : ರಾಜ್ಯದ ನೂತನ ಸಚಿವ ಸಂಪುಟ ರಚನೆಯಾಗುತ್ತಿದ್ದಂತೆ, ನೂತನ ಸಚಿವರಿಗೆ ಜಿಲ್ಲಾ ಉಸ್ತುವಾರಿಯ ( District Incharge Minister ) ಜವಾಬ್ದಾರಿಯನ್ನು ವಹಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿನ ನೆರೆ, ಪ್ರವಾಹ, ಕೊರೋನಾ 3ನೇ ಅಲೆಯ ನಿಯಂತ್ರಣ ಜವಾಬ್ದಾರಿಯನ್ನು ನೀಡಿದ್ದಾರೆ.


ಈ ಕುರಿತಂತೆ ಪಟ್ಟಿಯನ್ನು ಬಿಡುಗಡೆ ಮಾಡಿರುವಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ರಾಜ್ಯದಲ್ಲಿ ಕೋವಿಡ್-19 ನಿರ್ವಹಣೆ ಹಾಗೂ ನೆರೆ ಹಾವಳಿ ಪರಿಹಾರ ಕೆಲಸಗಳನ್ನು ತ್ವರಿತವಾಗಿ ಪರಿಶೀಲನೆ ಮಾಡಲು, ಈ ಕೆಳಕಂಡ ಸಚಿವರುಗಳನ್ನು ಅವರ ಹೆಸರಿನ ಮುಂದೆ ಸೂಚಿಸಿರುವ ಜಿಲ್ಲೆಗಳಿಗೆ, ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.


ಹೀಗಿದೆ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ (Karnataka District Incharge Minister List )

  1. ಗೋವಿಂದ ಕಾರಜೋಳ - ಬೆಳಗಾವಿ
  2. ಕೆ.ಎಸ್.ಈಶ್ವರಪ್ಪ - ಶಿವಮೊಗ್ಗ
  3. ಆರ್.ಅಶೋಕ್ - ಬೆಂಗಳೂರು ನಗರ
  4. ಬಿ.ಶ್ರೀರಾಮುಲು - ಚಿತ್ರದುರ್ಗ
  5. ವಿ.ಸೋಮಣ್ಣ - ರಾಯಚೂರು
  6. ಉಮೇಶ್ ಕತ್ತಿ - ಬಾಗಲಕೋಟೆ
  7. ಎಸ್ ಅಂಗಾರ - ದಕ್ಷಿಣ ಕನ್ನಡ
  8. ಜೆಸಿ ಮಾಧುಸ್ವಾಮಿ - ತುಮಕೂರು
  9. ಅರಗ ಜ್ಞಾನೇಂದ್ರ - ಚಿಕ್ಕಮಗಳೂರು
  10. ಡಾ.ಸಿಎನ್.ಅಶ್ವತ್ಥನಾರಾಯಣ - ರಾಮನಗರ
  11. ಸಿಸಿ ಪಾಟೀಲ್ - ಗದಗ
  12. ಆನಂದ್ ಸಿಂಗ್ - ವಿಜಯನಗರ ಮತ್ತು ಬಳ್ಳಾರಿ
  13. ಕೋಟಾ ಶ್ರೀನಿವಾಸ ಪೂಜಾರಿ - ಕೊಡಗು
  14. ಪ್ರಭು ಚೌಹಾಣ್ - ಬೀದರ್
  15. ಮರುಗೇಶ್ ನಿರಾಣಿ - ಕಲಬುರ್ಗಿ
  16. ಶಿವರಾಂ ಹೆಬ್ಬಾರ್ - ಉತ್ತರ ಕನ್ನಡ
  17. ಎಸ್.ಟಿ.ಸೋಮಶೇಖರ್ - ಮೈಸೂರು ಮತ್ತು ಚಾಮರಾಜನಗರ
  18. ಬಿ.ಸಿ ಪಾಟೀಲ್ - ಹಾವೇರಿ
  19. ಬೈರತಿ ಬಸವರಾಜು - ದಾವಣಗೆರೆ
  20. ಡಾ.ಕೆ.ಸುಧಾಕರ್ - ಚಿಕ್ಕಬಳ್ಳಾಪುರ
  21. ಕೆ.ಗೋಪಾಲಯ್ಯ - ಹಾಸನ
  22. ಶಶಿಕಲಾ ಜೊಲ್ಲೆ - ವಿಜಯಪುರ
  23. MTB ನಾಗರಾಜು - ಬೆಂಗಳೂರು ಗ್ರಾಮಾಂತರ
  24. ಕೆಸಿ ನಾರಾಯಣ್ ಗೌಡ - ಮಂಡ್ಯ
  25. ಬಿಸಿ ನಾಗೇಶ್ - ಯಾದಗಿರಿ
  26. ಸುನೀಲ್ ಕುಮಾರ್ - ಉಡುಪಿ
  27. ಹಾಲಪ್ಪ ಆಚಾರ್ - ಕೊಪ್ಪಳ
  28. ಶಂಕರ್ ಪಾಟೀಲ್ ಮುನೇನಕೊಪ್ಪ - ಧಾರವಾಡ
  29. ವಿ.ಮುನಿರತ್ನ - ಕೋಲಾರ
أحدث أقدم