ರಾಜ್ಯಕ್ಕೆ ಗುಡ್ ನ್ಯೂಸ್, ಕೊರೊನ ಮತ್ತಷ್ಟು ಇಳಿಕೆ, ಇಂದು 677 ಪಾಸಿಟಿವ್
ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 677 ಜನರಿಗೆ ಸೋಂಕು ತಗುಲಿದ್ದು, 24 ಜನ ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟು ಸಂಖ್ಯೆ 29,68,543 ಕ್ಕೆ ಏರಿಕೆಯಾಗಿದ್ದು, ಇದುವರೆಗೆ 37,627 ಜನ ಸೋಂಕಿತರು ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಇಂದು ಕೊರೋನಾ ಸೋಂಕಿನಿಂದ 1678 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 29,16,530 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಹೊಸದಾಗಿ 213 ಜನರಿಗೆ ಸೋಂಕು ತಗುಲಿದೆ. 7 ಜನ ಸೋಂಕಿತರೊಂದಿಗೆ ಮೃತಪಟ್ಟಿದ್ದು, 362 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 7318 ಸಕ್ರಿಯ ಪ್ರಕರಣಗಳಿವೆ.
ಜಿಲ್ಲಾವಾರು ಸೋಂಕಿತರ ಮಾಹಿತಿ:
ಬೆಂಗಳೂರು ನಗರ 213, ದಕ್ಷಿಣಕನ್ನಡ 102, ಉಡುಪಿ 63, ಉತ್ತರಕನ್ನಡ 41 ಹೊಸ ಪ್ರಕರಣ ವರದಿಯಾಗಿವೆ. ಯಾದಗಿರಿ, ವಿಜಯಪುರ, ರಾಮನಗರ, ರಾಯಚೂರು, ಕೊಪ್ಪಳ, ಹಾವೇರಿ, ಚಿಕ್ಕಬಳ್ಳಾಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಇವತ್ತು ಯಾವುದೇ ಪ್ರಕರಣ ವರದಿಯಾಗಿಲ್ಲ.