ರಾಜ್ಯದಲ್ಲಿ ಇಂದು ಕೊರೊನ ದಿಢೀರ್ ಏರಿಕೆ, 41 ಸಾವಿರ ಪಾಸಿಟಿವ್ ಕೇಸ್

ಮುಂದಿನ ದಿನಗಳಲ್ಲಿ ಕೊರೊನ ಮತ್ತಷ್ಟು ಉಲ್ಬಣಗೊಳ್ಳಲಿದೆ: ಸಚಿವ ಸುಧಾಕರ್ 


ಬೆಂಗಳೂರು: ಮುಂದಿನ ದಿನಗಳಲ್ಲಿ ಮತ್ತಷ್ಟು ಸೋಂಕು ಉಲ್ಬಣಗೊಳ್ಳುವ ಸಾದ್ಯತೆ ಇದೆ ಎಂದು ಸಚಿವ ಸುಧಾಕರ್ ಮಾಹಿತಿ ನೀಡಿದ್ದಾರೆ.


ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ದಿನಕ್ಕೆ 1 ಲಕ್ಷ ಪ್ರಕರಣಗಳು ವರದಿಯಾಗುತ್ತದೆ. ಜನವರಿ ಕೊನೆಯಲ್ಲಿ ಕೊರೊನಾ ಸೋಂಕು ಪೀಕ್ ಗೆ ಹೋಗುವ ಸಾಧ್ಯತೆ ಇದೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದ್ದಾರೆ.


ಜನವರಿ ಅಂತ್ಯದಲ್ಲಿ 1 ಲಕ್ಷ ಕೇಸ್ ಬರಬಹುದು ಎಂದು ತಜ್ಞರ ವರದಿ ಇದೆ, ತಜ್ಞರ ವರದಿಯ ಹಾಗೆಯೇ ಕೊರೊನಾ ಪ್ರಕರಣ ದಾಖಲಾಗುತ್ತಿದೆ. ಇನ್ನೂ ಜನವರಿ ಅಂತ್ಯದಲ್ಲಿ ಕೇಸ್ ಹೆಚ್ಚಳವಾದರೆ ಫೆಬ್ರವರಿ 2 ಅಥವಾ ಮೂರನೇ ವಾರದಲ್ಲಿ ಕೊರೊನಾ ಸೋಂಕು ಕಡಿಮೆಯಾಗುತ್ತದೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಮಾಹಿತಿ ನೀಡಿದ್ದಾರೆ.


ರಾಜ್ಯದಲ್ಲಿ ಇಂದು ಕೊರೊನ ದಿಢೀರ್ ಏರಿಕೆ, 41 ಸಾವಿರ ಪಾಸಿಟಿವ್ ಕೇಸ್


ಬೆಂಗಳೂರು: ರಾಜ್ಯದಲ್ಲಿ ಇಂದು 41,457 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. 8353 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.


ಸಕ್ರಿಯ ಪ್ರಕರಣಗಳ ಸಂಖ್ಯೆ 2,50,381 ಕ್ಕೆ ಏರಿಕೆಯಾಗಿದೆ. 20 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಇವತ್ತು 1,85,872 ಕೋವಿಡ್ ಪರೀಕ್ಷೆ ನಡೆಸಲಾಗಿದೆ.


ರಾಜಧಾನಿ ಬೆಂಗಳೂರಿನಲ್ಲಿ 25,595 ಜನರಿಗೆ ಸೋಂಕು ತಗುಲಿದ್ದು, 1.78 ಲಕ್ಷ ಸಕ್ರಿಯ ಪ್ರಕರಣಗಳಿವೆ. 7 ಜನ ಸೋಂಕಿತರು ಸಾವನ್ನಪ್ಪಿದ್ದಾರೆ.

Previous Post Next Post