ಕೊವಿಡ್ 19- 4ಜಿಲ್ಲೆಗಳಲ್ಲಿ ಶೂನ್ಯ, ಹನ್ನೊಂದು ಜಿಲ್ಲೆಗಳಲ್ಲಿ ಹತ್ತಕ್ಕಿಂತ ಕಡಿಮೆ ಪಾಸಿಟಿವ್, ದಕ್ಷಿಣ ಕನ್ನಡದಲ್ಲಿ ಅತಿ ಹೆಚ್ಚು ಪ್ರಕರಣ

ಕೊವಿಡ್ 19- 4ಜಿಲ್ಲೆಗಳಲ್ಲಿ ಶೂನ್ಯ, ಹನ್ನೊಂದು ಜಿಲ್ಲೆಗಳಲ್ಲಿ ಹತ್ತಕ್ಕಿಂತ ಕಡಿಮೆ ಪಾಸಿಟಿವ್, ದಕ್ಷಿಣ ಕನ್ನಡದಲ್ಲಿ ಅತಿ ಹೆಚ್ಚು ಪ್ರಕರಣ  


ಬೆಂಗಳೂರು : ರಾಜ್ಯದಲ್ಲಿ ಇಂದು ನಾಲ್ಕು ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ, 11 ಜಿಲ್ಲೆಗಳಲ್ಲಿ 10ಕ್ಕೂ ಕಡಿಮೆ ಕೇಸ್ ಸೇರಿದಂತೆ 1,350 ಜನರಿಗೆ ಕೊರೋನಾ ಪಾಸಿಟಿವ್, 18 ಸೋಂಕಿತರು ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.


ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ಬಿಡುಗಡೆ ಮಾಡಿದ್ದು, ಹಾವೇರಿ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ ವರದಿಯಾಗಿದೆ. ವಿಜಯಪುರ 06, ರಾಮನಗರ 03, ಕಲಬುರ್ಗಿ 02, ಗದಗ 02, ಧಾರವಾಡ 05, ಚಿಕ್ಕಬಳ್ಳಾಪುರ 02, ಚಾಮರಾಜನಗರ 06, ಬೀದರ್ 01, ಬೆಂಗಳೂರು ಗ್ರಾಮಾಂತರ 05, ಬಳ್ಳಾರಿ 02 ಮತ್ತು ಬಾಗಲಕೋಟೆ ಜಿಲ್ಲೆ 01 ಸೇರಿದಂತೆ 11 ಜಿಲ್ಲೆಗಳಲ್ಲಿ 10ಕ್ಕೂ ಕಡಿಮೆ ಪ್ರಕರಣಗಳು ವರದಿಯಾಗಿರೋದಾಗಿ ತಿಳಿಸಿದೆ.


ಇನ್ನೂ ಬೆಂಗಳೂರು ನಗರ 260, ಬೆಳಗಾವಿ 43, ದಕ್ಷಿಣ ಕನ್ನಡ 320, ಹಾಸನ 101, ಕೊಡಗು 63, ಮಂಡ್ಯ 26, ಮೈಸೂರು 102, ಶಿವಮೊಗ್ಗ 50, ಉಡುಪಿ 177, ತುಮಕೂರು 68 ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ 40 ಕೇಸ್ ಸೇರಿದಂತೆ ಇಂದು 24 ಗಂಟೆಯಲ್ಲಿ 1,350 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಇದರಿಂದ ಸೋಂಕಿತರ ಸಂಖ್ಯೆ 29,37,427ಕ್ಕೆ ಏರಿಕೆಯಾಗಿದೆ. ಇಂದು 1648 ಸೇರಿದಂತೆ ಇದುವರೆಗೆ 28,79,433 ಸೋಂಕಿತರು ಗುಣಮುಖರಾದ ಕಾರಣ, ಈಗ 20,845 ಸಕ್ರೀಯ ಸೋಂಕಿತರು ರಾಜ್ಯದಲ್ಲಿ ಇರುವುದಾಗಿ ತಿಳಿಸಿದೆ.


Previous Post Next Post