ರಷ್ಯಾ ಉಕ್ರೇನ್ ಯುದ್ಧ: ಕನ್ನಡಿಗ ನವೀನ್ ಸಾವು, ತುರ್ತು ಸಭೆ ಕರೆದು ಪ್ರಧಾನಿ ನರೇಂದ್ರ ಮೋದಿ

ರಷ್ಯಾ ಉಕ್ರೇನ್ ಯುದ್ಧ: ಕನ್ನಡಿಗ ನವೀನ್ ಸಾವು, ತುರ್ತು ಸಭೆ ಕರೆದು ಪ್ರಧಾನಿ ನರೇಂದ್ರ ಮೋದಿ 

ಉಕ್ರೇನ್​​ನಲ್ಲಿ ಕನ್ನಡಿಗ ಮತ್ತು ಎಂಬಿಬಿಎಸ್ 4ನೇ ವರ್ಷದ ವಿದ್ಯಾರ್ಥಿ​ ನವೀನ್​​ ​​ರಷ್ಯಾ ದಾಳಿಗೆ ಬಲಿಯಾಗಿದ್ದಾರೆ. ಇಂದು ಉಕ್ರೇನ್ ಯುದ್ಧ ಭೂಮಿಯಲ್ಲಿ ರಷ್ಯಾ ನಡೆಸಿದಂತ ಶೆಲ್ ದಾಳಿಗೆ ಖಾರ್ಕೀವ್ ನಗರದಲ್ಲಿ ಮೃತಪಟ್ಟಂತ ಕರ್ನಾಟಕದ ಹಾವೇರಿ ಮೂಲಕ ನವೀನ್ ತಂದೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ, ಸಾಂತ್ವಾನ ಹೇಳಿದ್ದಾರೆ. ಈ ಬೆನ್ನಲ್ಲೇ ಈಗ ಪ್ರಧಾನಿ ನರೇಂದ್ರ ಮೋದಿ ತುರ್ತು ಸಭೆ ಕರೆದಿದ್ದಾರೆ.


ಮುಂದಿನ 48 ಗಂಟೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ತುರ್ತು ಸಭೆ ನಡೆಸೋ ಸಾಧ್ಯತೆ ಇದೆ. ನವೀನ್​ ​ಸಾವು ಹಿನ್ನೆಲೆಯಲ್ಲಿ ಈ ಉನ್ನತ ಸಭೆ ನಡೆಸಲಾಗುತ್ತಿದೆ. ಉಕ್ರೇನ್​​ನಲ್ಲಿ ಸಿಲುಕಿರೋ ಭಾರತೀಯರನ್ನು ಹೇಗೆ ಯಾವುದೇ ಸಾವು ನೋವು ಸಂಭವಿಸದೆ ರಕ್ಷಿಸಬೇಕು ಎಂಬ ಸಭೆ ಇದಾಗಿದೆ.


ಉಕ್ರೇನ್ ನಲ್ಲಿ ಹಾವೇರಿಯ ನವೀನ್ ಸಾವು, ಮತ್ತೊಬ್ಬರಿಗೆ ಗಾಯ, ಸಿಎಂ ಬೊಮ್ಮಾಯಿ ಭಾವುಕ 

ಬೆಂಗಳೂರು: ಉಕ್ರೇನ್‌ ನ ಖಾರ್ಕಿವ್‌ ನಲ್ಲಿ ರಷ್ಯಾದ ಶೆಲ್ ದಾಳಿಯಲ್ಲಿ ರಾಜ್ಯದ ಹಾವೇರಿಯ ನವೀನ್ ಪ್ರಾಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ನವೀನ್ ಅವರ ಕುಟುಂಬ ನನಗೆ ಗೊತ್ತು. ಅವರು ನನಗೆ ತುಂಬಾ ಹತ್ತಿರವಾಗಿದ್ದಾರೆ. ಪ್ರಧಾನಿ ಮೋದಿ ಅವರು ಕೂಡ ನವೀನ್ ಕುಟುಂಬದವರೊಂದಿಗೆ ಮಾತನಾಡಿದ್ದಾರೆ ಎಂದರು.


ಮೃತದೇಹವನ್ನು ಭಾರತಕ್ಕೆ ತರಲು ನಾವು ಪ್ರಯತ್ನಿಸಿದ್ದು, ನೆರವಿಗಾಗಿ ಪಿಎಂಒ ಮತ್ತು ಎಂಇಎಗೆ ಮನವಿ ಮಾಡಿದ್ದೇನೆ. ಇಬ್ಬರು ವ್ಯಕ್ತಿಗಳು ನವೀನ್ ನೊಂದಿಗೆ ಇದ್ದರು. ಅವರಲ್ಲಿ ಒಬ್ಬರು ಗಾಯಗೊಂಡಿದ್ದಾರೆ. ಅವರೂ ಹಾವೇರಿ ಜಿಲ್ಲೆಯ ಚಳಗೇರಿ ಮತ್ತು ರಾಣೆಬೆನ್ನೂರು ತಾಲೂಕಿನವರು ಎಂದು ಸಿಎಂ ತಿಳಿಸಿದ್ದಾರೆ.


ನವೀನ್ ಕುಟುಂಬದವರು ಗೊತ್ತು ಎಂದು ಹೇಳುವಾಗ ಸಿಎಂ ಗದ್ಗದಿತರಾಗಿದ್ದು, ಮಾತನಾಡಲಾಗದೇ ಭಾವುಕರಾಗಿ ಬಳಿಕ ಮಾತು ಮುಂದುವರೆಸಿದ್ದಾರೆ.



Previous Post Next Post